ಪೋಸ್ಟ್‌ಗಳು

Aakasmika ಅಂದಿಗೂ ಇಂದಿಗೂ II One Of The Superhit Movie Directed By T S Nagabharana

ಇಮೇಜ್
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು, ಈ ಒಂದು ಹಾಡು ಜಗತ್ತಿನ ಮೂಲೆ ಮೂಲೆ ತಲುಪೋ ಹಾಗೆ ಮಾಡಿದ್ದು ೧೯೯೩ ರಲ್ಲಿ ಬಿಡುಗಡೆ ಆದ ವರನಟ ನಟಿಸಿ ಟಿ ಎಸ ನಾಗಾಭರಣ ನಿರ್ದೇಶಿಸಿದ  ಆಕಸ್ಮಿಕ ಚಿತ್ರದ ಮೂಲಕ  , ಈ ಹಾಡು ಇಂದಿಗೂ ಕನ್ನಡಿಗರ ಸ್ವಾಭಿಮಾನ ಮತ್ತು  ಭಾಷಾಭಿಮಾನದ ಸಂಕೇತವಾಗೇ ಉಳಿದಿದೆ. ಖ್ಯಾತ ಕಾದಂಬರಿಕಾರ ಶ್ರೀ ತಾ ರ ಸು ಅವರ ೩ ಕಾದಂಬರಿಗಳು ಸೇರಿ ಆಗಿದ್ದೆ ಆಕಸ್ಮಿಕ . ಡಾಕ್ಟರ್ ರಾಜ್ ಕುಮಾರ್ ಗೆ ಎಂಟನೇ ಫಿಲಂ ಫೇರ್ ಅವಾರ್ಡ್ ತಂದು ಕೊಟ್ಟ ಚಿತ್ರ ,  ಹಲವು ವರ್ಷಗಳ ಗ್ಯಾಪ್  ನ  ನಂತರ ರಾಜಕುಮಾರ್ ಈ ಚಿತ್ರದಲ್ಲಿ ನಟಿಸಿದ್ದರು ಹಾಗಾಗಿ ಈ ಚಿತ್ರ ಬಿಡುಗಡೆ ಆಗಿ ಯಶಸ್ವೀ  ೨೫ ವಾರಗಳನ್ನ ಪೂರಯ್ಸಿತ್ತು , ಆ ವಯಸ್ಸಿನಲ್ಲೂ ಅಭಿಮಾನಿಗಳಿಗೆ ರಂಜಿಸಿ ರಸದೌತಣ ನೀಡಿದ್ದ ದ್ರ್ ರಾಜ್ಕುಮಾರ್ ಅಭಿನಯ ಎಲ್ಲರನ್ನ ಮಂತ್ರ ಮುಗ್ದರಾಗಿಸಿತ್ತು , ಚಿತ್ರದ ಕಥೆ ಮತ್ತು ಚಿತ್ರ ಕಥೆ ಕೂಡ ನೋಡುಗನನ್ನ ಪ್ರತಿ ಪಾತ್ರಗಳೊಡನೆ ಬೆಸೆಯೋ ಹಾಗೆ ಮಾಡಿತ್ತು , ಅಂದು ಮಕ್ಕುಳು ದೊಡ್ಡವರೆನ್ನದೆ ಸಾಗರೋಪಾದಿಯಲ್ಲಿ ಜನ ಚಿತ್ರ ಮಂದಿರಗಳಿಗೆ ಲಗ್ಗೆ ಇಟ್ಟದ್ದು ಯಾರೋ ಮರೆಯೋಲ್ಲ , ಹಂಸಲೇಖ ಸಂಗೀತ ಸಂಯೋಜನೆಯಎಲ್ಲ ಹಾಡುಗಳು ಚಿತ್ರದ ವೇಗಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿತ್ತು. "ಆಗುಂಬೆಯ ಪ್ರೇಮ ಸಂಜೆ ಯಾ" ಹಾಡು ಅಂದಿನ ಯುವ ಪ್ರೇಮಿಗಳ ಅಚ್ಚು ಮೆಚ್ಚು . ಚಿತ್ರದ ಎಲ್ಲ ೫ ಹಾಡು...

Shhh ಅಂದಿಗೂ ಇಂದಿಗೂ II One of the Best Horror Suspense Thriller movie in Sandalwood

ಇಮೇಜ್
  ೧೯೯೩ ರಲ್ಲಿ ಬಿಡುಗಡೆ ಆದ ಕನ್ನಡ ದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಶ್!!! . ಅಸಾಮಾನ್ಯ ಪ್ರತಿಭೆ ಉಪೇಂದ್ರ ನಿರ್ದೇಶನದ ಎರಡನೇ ಚಿತ್ರ , ಮೊದಲನೇ ಚಿತ್ರ ತರ್ಲೆ ನನ್ಮಗ ಯಶಸ್ಸಿನ ನಂತರ ಸಿಕ್ಕ ಅವಕಾಶವನ್ನ ತನ್ನ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಉಪ್ಪಿ Shhh ನ್ನ ತೆರೆಗೆ ತರುವಲ್ಲಿ ಹೊಸ ಪ್ರಯೋಗಗಳನ್ನ ಕನ್ನಡಿಗರ ಮುಂದಿಟ್ಟಿದ್ದರು , ಈ ಸಿನಿಮಾ ದ ಚಿತ್ರ ಕಥೆ ಗೆ ಅಂದಿನ ಎಷ್ಟೋ ಹಿರಿಯ ನಿರ್ದೇಶಕರುಗಳು ತಲೆ ಬಾಗಿದ್ದರು , ಅಲ್ಲಿವರೆಗೂ ಬೆರಳೆಣಿಕೆಯಷ್ಟೇ ಸೂಸ್ಪೆನ್ಸ ಥ್ರಿಲ್ಲರ್ ಜೊಂವ್ರ್ ನ ಸಿನಿಮಾ ಗಳು ಕನ್ನಡದಲ್ಲಿ ತೆರೆ ಕಾಣುತ್ತಿದ್ದವು. ಈ ಸಿನಿಮಾ ದ ಮೂಲಕ ಉಪೇಂದ್ರ ಹೊಸ ಟ್ರೆಏಂಡ್ ಅನ್ನ ಸೃಷ್ಟಿ ಮಾಡಿಬಿಟ್ಟರು. ಕುಮಾರ್ ಗೋವಿಂದ್ ನಿರ್ಮಾಣ ಮತ್ತು ನಾಯಕ ನಟನಾಗಿ ನಟಿಸಿದ ಮೊದಲ ಚಿತ್ರ. ಅಶೋಕ್ ಕಶ್ಯಪ್ ಛಾಯಾಗ್ರಹಣ ಕೂಡ ಈ ಸಿನಿಮಾ ದ ಪ್ಲಸ್ ಪಾಯಿಂಟ್. ಈ ಸಿನಿಮಾ ದಲ್ಲಿ  ಬಾರೋ  ಹೊರರೋರ್ ಸೀಕ್ವೆನ್ಸ್ ಗಳು ಮತ್ತು ಅದಕ್ಕೆ ತಕ್ಕನಾದ BGM ಗಳು  ಇಂದು ಕೂಡ  ನೋಡುಗರಿಗೆ ಥ್ರಿಲ್ ನೀಡುತ್ತದೆ , ಥ್ರಿಲ್ಲರ್ಸಾ ಮಂಜು ನಿರ್ದೇಶನದ ಸ್ಟಂಟ್ ಅಂದು ನೋಡುಗನಿಗೆ ಕೊಟ್ಟ ಕಿಕ್ ಅಂತಿಟ್ಟದ್ದಲ್ಲ. ಸಾಧು ಕೋಕಿಲ ಸಂಗೀತ ನಿರ್ದೇಶನದ ಮೊದಲ ಚಿತ್ರ  ಇದ್ದಾಗಿದ್ದು ಅವರು ಕೊಟ್ಟ ಎರಡು ಹಾಡುಗಳು ಇಂದಿಗೂ ಗುನುಗೋ ಮೆಲೊಡಿಗಳು . ಅದಾಗಲೇ ಕನ್ನಡ ಚಿತ್ರ ರಂಗದಲ್ಲಿ ದೊಡ್ಡ ನಟ ನಿರ್ದೇಶಕರಾಗಿ ಬೆಳೆದು ನ...

Ramaachari ಅಂದಿಗೂ ಇಂದಿಗೂ II One of the Best Musical drama Movie in Sandalwood

ಇಮೇಜ್
 ರಾಮಾಚಾರಿ, ೧೯೯೧ ರಲ್ಲಿ ಬಿಡುಗಡೆ ಆದ ಈ ಸಿನಿಮಾ ಅಂದು ಅತಿ ದೊಡ್ಡ ಇತಿಹಾಸಾನೇ ಬರೆದಿತ್ತು . ರವಿಚಂದ್ರನ್  ಮತ್ತು ಮಾಲಾಶ್ರೀ ಜೋಡಿ  ತೆರೆ ಮೇಲೆ  ಮಾಡಿದ್ದ ಮೋದಿ ಅಂತಾದ್ದು. ದುಬಾರಿ ವೆಚ್ಚದಲ್ಲಿ  ಶಾಂತಿ ಕ್ರಾಂತಿ ಸಿನಿಮಾ ನಿರ್ಮಾಣ ಮಾಡಿ ಆಗಷ್ಟೇ ಸೋಲು ಕಂಡಿದ್ದ  ರವಿಚಂದ್ರನ್ ಗೆ ಗೆಲುವಿನ ದಾರಿ ತೋರಿಸಿತ್ತು ಈ ರಾಮಾಚಾರಿ. ತಮಿಳಿನ  ಚಿನ್ನ ತಂಬಿ ಅನ್ನೋ ಸೂಪರ್ ಹಿಟ್ ಚಿತ್ರ ಕನ್ನಡಲ್ಲಿ ರಾಮಾಚಾರಿ ಆದಾಗ ಚಿತ್ರ ರಂಗದಲ್ಲೊಂದು ಸಂಚಲನ ಮೂಡಿತ್ತು.  ಡಿ  ರಾಜೇಂದ್ರ ಬಾಬು ಈ ಸಿನಿಮಾ ಡಾ ನಿರ್ದೇಶಕರು,ನಾದ ಬ್ರಹ್ಮ ಹಂಸಲೇಖ ಅವರ ಸಂಗೀತ ಹಲವಾರು ತಲೆಮಾರುಗಳೇ ಕಳೆದರೂ ಇಂದಿಗೂ ಹಚಾ ಹಸಿರಾಗೇ ಇದೆ..ಯಾರಿವಳು ಯಾರಿವಳು ಹಾಡು ಅಂದಿನ ಸೂಪರ್ ಫೇವರಿಟ್. ಈ ಸಿನಿಮಾ ಡ ಸಂಗೀತ ಸಂಯೋಜನೆ ಹಂಸಲೇಖ ಅವರಿಗೆ ಫಿಲಂ ಫಾರ್ ಅವಾರ್ಡ್ ತಂದುಕೊಟ್ಟಿತ್ತು.  ಶ್ರೀಮಂತ ಮನೆತನದ ೫  ಅಣ್ಣಂದಿರ ಮುದ್ದಿನ ತಂಗಿ ನಂದಿನಿಯ ಬಾಳಲ್ಲಿ ಮುಗ್ದ  ರಾಮಾಚಾರಿ ಬಂದಾಗ ಆಕೆಯ ಬದುಕಲ್ಲಿ ನಡೆಯೋ ಸಾಲು ಸಾಲು ಆಚರಿಗಳು ಈ ರಾಮಾಚಾರಿ, ತಿಳಿಯದೆ ನಾಯಕಿ ಗೆ ತಾಳಿ ಕಟ್ಟಿ ರಾಮಾಚಾರಿ ಮತ್ತು ಆತನ ವಿಧವೆ ತಾಯಿ ನಾಯಕಿಯ  ೫ ಅಣ್ಣಂದಿರ ಕ್ರೂರತ್ವ ಡಾ  ನಡುವೆ ನಲುಗಿ ಒದ್ದಾಡಿ ಗೆಲ್ಲೋದೇ  ಈ ರಾಮಾಚಾರಿ.   ರವಿಚಂದ್ರನ್ ಮತ್ತು ಮಾಲಾಶ್ರೀಯ ಸಿನಿಮಾ ಕೆರಿಯರ್ ನ ಯಶಸ್ವ...

Muthina Haara ಅಂದಿಗೂ ಇಂದಿಗೂ II One of the Best War Drama Movie in Sandalwood

ಇಮೇಜ್
 ಮುತ್ತಿನ ಹಾರ , ವಿಷ್ಣುವರ್ಧನ್ ಸಿನಿಮಾ ಜೀವನದ ಅತ್ತ್ಯತ್ತಮ ಚಿತ್ರಗಳಲ್ಲೊಂದು , ೧೯೯೦ ರಲ್ಲಿ ಬಿಡುಗಡೆ ಆದ ಈ ಸಿನಿಮಾ ರಾಜೇಂದ್ರ ಸಿಂಗ್ ಬಾಬು ಇಂತಹ   ಅಸಾಮಾನ್ಯ ನಿರ್ದೇಶಕ  ಅನ್ನೋದನ್ನ. ಕನ್ನಡ ಚಿತ್ರ ರಂಗಕ್ಕೆ ಸಾರಿ ಹೇಳಿತ್ತು. ಮಡಿಕೇರಿ ಸಿಪಾಯಿ ಅನ್ನೋ ಒಂದು ಹಾಡು ಇಡೀ ದೇಶದ ಇಕ್ಕೆಲೆಗಳಲ್ಲಿದ್ದ  ಕೊಡವರ ನರ ನಾಡಿ  ಹೊಕ್ಕಿತ್ತು.ಮುತ್ತಿನ ಹಾರ ಸಿನಿಮಾ ಕನ್ನಡ ಡಾ  ಪ್ರೇಕ್ಷಕರಿಗೆ ದೇಶ ಭಕ್ತಿ , ಯುದ್ಧ ಮತ್ತು ಸೈನಿಕ ರ ವಯಕ್ತಿಕ  ಜೀವನದ ಅನಾವರಣ ಮಾಡಿತ್ತು. ಇದೆಲ್ಲವನ್ನ ಮೀರಿ ನಿಂತಿದ್ದು ವಿಷ್ಣುವರ್ಧನ್ ಸುಹಾಸಿನಿ ಮತ್ತು ಅಶ್ವಥ್ ರ ಮನಸು ಮುಟ್ಟುವ ನಟನೆ. , ಸಿನಿಮಾ ದಲ್ಲಿ ಹಂಸಲೇಖ ಸಂಯೋಜನೆಯ ಒಂದೊಂದು ಹಾಡುಗಳೂ ಒಂದೊಂದು ಜೋಡಿಸಿದ ಹಾಗಿತ್ತು. ಚಿತ್ರದ ನಾಯಕ ನೇ ಸೈನಿಕ. ವಿಶ್ವ ಯುದ್ಧ , ಪ್ರೇಮ, ಬದುಕು, ಮಗನ ಮೇಲಿನ ಮಮಕಾರ, ನಗು, ಅಳು, ತಂದೆ ತಾಯಿಯರ ತೊಳಲಾಟ ಎಲ್ಲ ಭಾವನೆಗಳೂ ಇಲ್ಲಿ  ನೋಡುಗ ಪ್ರೇಕ್ಷಕನನ್ನ ತುಂಬಾ ದಿನ ಕಾಡಿದ್ದವು.  ರಾಷ್ಟ್ರ ಪ್ರಶಸ್ತಿ , ರಾಜ್ಯ ಪ್ರಶಸ್ತಿ ಪುರಸ್ಕಾರಗಳು ಈ ಸಿನಿಮಾ ಗೆ ದಕ್ಕಿತ್ತು. ಮುತ್ತಿನ ಹಾರ ಚಿತ್ರದ ವಿಶುಅಲ್ಸ್  ಮತ್ತು ಹಿನ್ನೆಲೆ ಸಂಗೀತ ಅಂದು ಕನ್ನಡ ದ ಪ್ರೇಕ್ಷಕರಿಗೆ ಎಲ್ಲಿಲ್ಲದ ಹೊಸ ಅನುಭವ. ಇಂತಹ ಸಿನಿಮಾವನ್ನ ಕನ್ನಡಕ್ಕೆ ನೀಡಿದ ನಿರ್ದೇಶಕರಿಗೆ ದೊಡ್ಡ ಸಲಾಂ. ಮುತ್ತಿನ ಹಾರ ಯುವ ಪ್ರೇಮಿಗಳಿಂದ...

Amruthavarshini ಅಂದಿಗೂ ಇಂದಿಗೂ One of the Heart Touching Love Story Made In Sandalwood

ಇಮೇಜ್
 ಅಮೃತ ವರ್ಷಿಣಿ , ೧೯೯೭ ರಲ್ಲಿ ಬಿಡುಗಡೆ ಆದ ಈ ಚಿತ್ರದ ತುಂತುರು ಅಲ್ಲಿ ನೀರ ಹಾಡು ಅನ್ನೋ ಒಂದು ಹಾಡು ಯುವ ಜನಮಾನಸದಲ್ಲಿ ಅಂದಿನಿಂದ ಇಂದಿಗೂ ನೆಲೆಯೂರಿದೆ. ದಿನೇಶ್ ಬಾಬೂ ನಿರ್ದೇಶನದ ಈ ಸಿನಿಮಾ ಅಂದಿನ ಮಟ್ಟಿಗೆ ಕನ್ನಡ ಚಿತ್ರ ರಂಗಕ್ಕೆ ವಿಭಿನ್ನ ಪ್ರಯೋಗ. ಚಂದದ ನಟ ರಮೇಶ್ ಅರವಿಂದ್ ಮೊದಲ ಬಾರಿಗೆ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡರೂ, ಈ ಸಿನಿಮಾ  ಅಂದು ದಾಖಲೆ ಬರೆದಿತ್ತು. ಫಿಲಂ ಫೇರ್  ಮತ್ತು ರಾಜ್ಯ ಪ್ರಶಸ್ತಿಗಳ ಸುರಿ ಮಳೆ ಯಾಗಿತ್ತು. ಸಿನಿಮಾದ ಚಿತ್ರ ಕಥೆ, ಶರತ್ ಬಾಬೂ ಸುಹಾಸಿನಿ ರಮೇಶ್ ರ ನಟನೆ ಅದ್ಬುತ . ಹಲವು ವರುಷಗಳ ಪ್ರೇಯಸಿ ಯನ್ನ ಖಾಯಿಲೆಯಿಂದ ಕಳೆದುಕೊಂಡ ಅಭಿಷೇಕ್ ಸ್ನೇಹಿತ ಹೇಮಂತ್ ಮನೆಗೆ ಬಂದಾಗ ಆತನ ಹೆಂಡತಿ ಯಲ್ಲಿ  ತೀರಿ ಹೋದ ಪ್ರೇಯಸಿಯ ಗುಣಗಳನ್ನ ಕಂಡು ಆಕೆಯನ್ನ ತನಗರಿವಿಲ್ಲದಂತೆ ಗಾಢವಾಗಿ ಪ್ರೀತಿಸುತ್ತಾನೆ. ಹೇಮಂತ್ಗೆ   ಈ ವಿಷಯ ತಿಳಿಯುತ್ತಿದ್ದಂತೆ ಅಭಿಷೇಕ್ ಅವನನ್ನ ಪ್ರಪಾತಕ್ಕಿ ತಳ್ಳಿ ಸಾಯಿಸುತ್ತಾನೆ, ಅಭಿಷೇಕ್ ಮಾಡಿದ ಈ ಕೆಲಸ ವೀಣಾ ಳಿಗೆ ತಿಳಿದಾಗ ಮುಂದೇನಾಗುವುದು ಎನ್ನೋದೇ ಈ ಸಿನಿಮಾದ ತಿರುಳು. ರಮೇಶ್ ಮತ್ತು ಸುಹಾಸಿನಿ ಯಾ ಅಭಿನಯ ೯೦ ರ ದಶಕದ ಯುವಕ ಯುವತಿಯರ ಮನಸಲ್ಲಿ ಅಚ್ಚಳಿಯದೆ ಉಳಿದಿತ್ತು. ಸುಮಾರು ೯ ಹಾಡುಗಳ ಸಾಹಿತ್ಯ  ಬರೆದ ಕೆ ಕಲ್ಯಾಣ್ ಈ ಸಿನಿಮಾ ಗೆ ದೊಡ್ಡ ಪ್ಲಸ್ ಪಾಯಿಂಟ್. ಅಮೃತ ವರ್ಷಿಣಿ ಎಂದೊಡನೆ ಹಾಡುಗಳು ಮತ್ತು ಈ ಮೂರು ನಟರ...

Beladingala Bale ಅಂದಿಗೂ ಇಂದಿಗೂ II The Best Classic Love Story Ever Made in Sandalwood

ಇಮೇಜ್
 ಬೆಳದಿಂಗಳ ಬಾಲೆ, ೧೯೯೫ ರಲ್ಲಿ ಬಿಡುಗಡೆ ಆದ ಯಂಡಮೂರಿ ವೀರೇಂದ್ರನಾಥ್ ಕಾದಂಬರಿ ಆಧಾರಿತ ಚಿತ್ರ. ಕನ್ನಡ ಡಾ ಯಶಸ್ವಿ ನಿರ್ದೇಶಕ  ಸುನಿಲ್ ಕುಮಾರ್ ದೇಸಾಯಿ ಬತ್ತಳಿಕೆಯಿಂದ ಬಂಡ ಈ ಸಿನಿಮಾ ೯೦ ರ ದಶಕದ ಅತೀ ಜನಪ್ರಿಯ ಚಿತ್ರಗಳಲ್ಲೊಂದಾಗಿತ್ತು , ಚೆಸ್ ಗ್ರಾಂಡ್ ,ಮಾಸ್ಟರ್ ರೇವಂತ್ ಮತ್ತು ಅನಾಮಿಕ ಹುಡುಗಿಯ ನಡುವಿನ ಒಗಟು,ಪ್ರಶ್ನೆ, ಉತ್ತರ, ಹುಡುಕಾಟದ ಏರಿಳಿತವೇ ಬೆಳದಿಂಗಳ ಬಾಲೆ.  ಕನ್ನಡ ಸಿನಿಮಾ ಇತಿಹಾಸದಲ್ಲೇ  ಅತೀ ಅಪರೂಪದ ನಿರೂಪಣೆ ಒಳಗೊಂಡ ನೋಡುವ ಪ್ರೇಕ್ಷಕರಲ್ಲಿ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸಿತ್ತು. ಸಿನಿಮಾ ಡಾ ಕಡೆಯ ದೃಶ್ಯದವರೆಗೂ ಬೆಳದಿಂಗಳ ಬಾಲೆಯನ್ನ ಗುಪ್ತವಾಗಿಡುತ್ತ ನಾಯಕ ನ ಒದ್ದಾಟ ಮತ್ತು ಹುಡುಕಾಟಗಳೊಡನೆ ಪ್ರೇಕ್ಷಕರಿಗೆ ಹೊಸ ತೆರನಾದ ಅನುಭವ ನೀಡಿದ್ದ ಚಿತ್ರ, ಚಿತ್ರದ ಹಿನ್ನೆಲೆ ಸಂಗೀತ ಬೆಳದಿಂಗಳ ಬಾಲೆ ಗೆ ಪ್ಲಸ್ ಪಾಯಿಂಟ್ ಬೆಳದಿಂಗಳ ಬಾಲೆ ಗೆ ವಾಯ್ಸ್ ಕೊಟ್ಟ ಮಂಜುಳಾ ಗುರುರಾಜ್ ಗೆ ರಾಜ್ಯ ಪ್ರಶಸ್ತಿ ಕೂಡ ಬಂದಿತ್ತು..ಈ ಸಿನಿಮಾ ಗೆ ದಕ್ಕಿದ ಗೌರವ ಮತ್ತು ಪ್ರಶಸ್ತಿಗಳೆಷ್ಟೋ. ಬೆಳದಿಂಗಳ ಬಾಲೆ ಚಿತ್ರಕ್ಕೆ ಈಗ ಪೂರ್ತಿ ೨೫ ವರ್ಷ ಈಗಲೂ ನೋಡುಗ ಪ್ರೇಕ್ಷಕರಿಗೆ ಅದೇ ಅನುಭವ ಕೊಡುತ್ತದೆ.ಬೆಳದಿಂಗಳ ಬಾಲೆ  ೯೦ ರ ದಶಕದ ಜನರೇಶನ್ ನ ಆಲ್ ಟೈಮ್  ಫೇವರಿಟ್ ಅಂದು -ಇಂದಿಗೂ. ಅಂದಿಗೂ ಇಂದಿಗೂ - Forever and today, Beladingala Baale is a Kannada movie released on...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬ್ಲಾಕ್ ಬಸ್ಟರ್ ಮತ್ತು ಮೊದಲ ಫ್ಲಾಪ್ ಸಿನಿಮಾ ಯಾವುದು? Challenging Star Darshan First blockbuster Hit and Flop Movies

ಇಮೇಜ್
 ಚಾಲೆಂಜಿಂಗ್ ಸ್ಟಾರ್ ದರ್ಶನ , ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್. ಇಲ್ಲಿವರೆಗೂ ೫೩ ಸಿನಿಮಾಗಳನ್ನ ಕೊಟ್ಟಿರೋ ದರ್ಶನ ರ ಸಿನಿಮಾ ಜರ್ನಿ ಯಲ್ಲಿ  ಎಷ್ಟೋ ಸೂಪರ್ ಹಿಟ್ ಸಿನಿಮಾ ಗಳಿವೆ, ಬ್ಲಾಕ್ ಬಸ್ಟರ್ ಮತ್ತು ಫ್ಲಾಪ್ ಗಳಿವೆ ಆದರೆ ದರ್ಶನ್ ಕೆರಿಯರ್ ನ ಮೊದಲ ಫ್ಲಾಪ್ ಮತ್ತು ಮೊದಲ  ಬ್ಲಾಕ್ ಬಸ್ಟರ್ ಯಾವ್ದು. ಮೆಜೆಸ್ಟಿಕ್ ಸಿನಿಮಾ ಮೂಲಕ ನಾಯಕ ನಟರಾಗಿ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟ ದರ್ಶನ ಆಗಿನ ಯುವ ಪೀಳಿಗೆಯ ನಟರಲ್ಲಿ ಅತ್ಯಂತ ಭರವಸೆ ಮೂಡಿಸಿದ್ದರು. ಮೆಜೆಸ್ಟಿಕ್ ಚಿತ್ರದಲ್ಲಿನ ನಟನೆ ಅಭಿಮಾನಿ ಬಳಗವನ್ನ ಹುಟ್ಟು ಹಾಕಿತ್ತು ಆದರೆ  " ನಿನಗೋಸ್ಕರ " ದರ್ಶನ ಕೆರಿಯರ್ ನ ಮೊದಲ ಫ್ಲಾಪ್ ಸಿನಿಮಾ ಆಗಿತ್ತು  , ಈ  ಚಿತ್ರ ಫ್ಲಾಪ್ ಆದಾಗ ಗಾಂಧಿನಗರದಲ್ಲಿ ನಕ್ಕು ಗುಸು ಗುಸು ಮಾತಾಡಿದವರೇ ಹೆಚ್ಚು. ಆಗ ಜೋಗಿ ಪ್ರೇಮ್ ನಿರ್ದೇಶನದ "ಕರಿಯ" ಚಿತ್ರದ ಮೂಲಕ ತಾನು ಮತ್ತೆ ಮೈ ಕೊಡವಿ ಎದ್ದು ನಿಂತ ದರ್ಶನ, ತನ್ನದೇ ಮ್ಯಾನರಿಸಂ  ಮತ್ತು ಬಾಡಿ ಲ್ಯಾಂಗ್ವೇಜ್ ನಿಂದ ಮನೆ ಮಾತಾದರು. ಕರಿಯ ದರ್ಶನ ರ ಸಿನಿಮಾ ಕೆರಿಯರ್ ನಲ್ಲಿ ಮೊದಲ ಬ್ಲಾಕ್ ಬಸ್ಟರ್ ಆಗಿದೆ. ಪುಟಾಣಿಗಳಿಂದ ಹಿಡಿದು ಮುದುಕರವರೆಗೂ ಅತೀ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿರುವ ದರ್ಶನ  ಅಲ್ಲಿಂದ ಇಲ್ಲಿವರೆಗೂ ಹಲವಾರು ಹಿಟ್ ಸೂಪರ್ ಹಿಟ್ಗಳನ್ನ ಕನ್ನಡದ ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ, ಮುಂದಿನ ರಾಬರ್ಟ್ ಚಿತ್ರ ...